ಕಲಾ ಪ್ರಯಾಣದ ಭಾಗ. ಹೊಸತೊಂದನ್ನು ತಿಳಿದುಕೊಳ್ಳುವ ಪ್ರಯತ್ನ. ಹಿರಿಯ ಕಲಾವಿದರ ಜೊತೆಗೂಡುವ, ಅನುಭವ ಕೇಳಿಸಿಕೊಳ್ಳುವ ಅವಕಾಶ. ಮಾಹಿತಿ ವಿನಿಮಯ..!
ಹಾಸನದಲ್ಲಿ ನಡೆಯಲುದ್ದೇಶಿಸಿದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಆಯೋಜಕರು ಮಾಡಿಕೊಟ್ಟಿದ್ದಾರೆ. ಹಿರಿಯ ಕಲಾವಿದರಾದ ಚಿ.ಸು. ಕೃಷ್ಣ ಸೆಟ್ಟಿ ಅವರ ಕೃಷ್ಣ ಸೆಟ್ಟಿ ಫೌಂಡೇಶನ್ ಮತ್ತು ಬಿ.ಎಸ್. ದೇಸಾಯಿ ಅವರ ಚಿತ್ಕಲಾ ಫೌಂಡೇಶನ್ ಆಶ್ರಯದಲ್ಲಿ ಹಾಸನದಲ್ಲಿ ಈ ಕಾರ್ಯಾಗಾರ ನಡೆಯುತ್ತಿದೆ.
| ಆಯೋಜಕರ ಕುರಿತು |
ಕೃಷ್ಣ ಸೆಟ್ಟಿ ಫೌಂಡೇಶನ್ ಖ್ಯಾತ ಕಲಾವಿದರಾದ ಚಿ.ಸು.ಕೃಷ್ಣ ಸೆಟ್ಟಿ ಅವರಿಗೆ ಸೇರಿದ್ದು. ಈಗಾಗಲೇ ಅನೇಕ ಕಲಾಚಟುವಟಿಕೆಗಳು ಈ ಫೌಂಡೇಶನ್ ಆಯೋಜಕತ್ವದಲ್ಲಿ ನಡೆದಿವೆ. ಸಾಕಷ್ಟು ಒಳ್ಳೆಯ ಉದ್ದೇಶದೊಂದಿಗೆ ಆರಂಭವಾಗಿರುವ ಸಂಸ್ಥೆಯಾಗಿದೆ. ಚರ್ಚೆ ನಡೆಯಬೇಕು ಎನ್ನುವ ಉದ್ದೇಶದಿಂದ next step workshop ಆರಂಭಿಸಿ ಇದೀಗ ಎರಡನೇ ಆವೃತ್ತಿ ಆಯೋಜಿಸಿದೆ.
ಚಿತ್ಕಲಾ ಫೌಂಡೇಶನ್ ಕೂಡ ಕಳೆದ ಅನೇಕ ವರ್ಷಗಳಿಂದ ಕಲಾಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದು, ಕಲಾಶ್ರೀ ಗ್ಯಾಲರಿಯ ಮೂಲಕ ಹಾಸನದ ಕಲಾಸಕ್ತರಿಗೆ ಕಲಾರಸದೌತಣ ನೀಡುತ್ತಾ ಬಂದಿದೆ. ಈಗ ಕೃಷ್ಣ ಸೆಟ್ಟಿ ಫೌಂಡೇಶನ್ ಜೊತೆ ಕೈಜೋಡಿಸಿ ಈ ಕಾರ್ಯಾಗಾರಕ್ಕೆ ಬಲ ತುಂಬುವ ಕೆಲಸ ಮಾಡುತ್ತಿದೆ.
