ಜ. 21: ಕಲಾ ಸಂಪರ್ಕ / 𝗞𝗔𝗟𝗔 𝗦𝗔𝗠𝗣𝗔𝗥𝗞𝗔

Share This

2024, ಜನವರಿ 21. ನಾಳೆ ಭಾನುವಾರವೇ…
ಬೆಳಗ್ಗೆ 11ರಿಂದ ಸಂಜೆ 5ರ ತನಕ.
ಬನ್ನಿ ಭೇಟಿಯಾಗೋಣ!
ಸ್ನೇಹಿತರೆ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಪಾರ್ಕ್ ಕಲಾವಿದರು, ಕಲಾಪ್ರಿಯರ ಭೇಟಿಗೆ ಸಾಕ್ಷಿಯಾಗಲಿದೆ. ಗಣಪತಿ ಎಸ್. ಹೆಗಡೆ Ganapathi S Hegde ಮುಂದಾಳತ್ವದ ಕೋಬಾಲ್ಟ್ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮವೊಂದಕ್ಕೆ ಚಾಲನೆ ಕೊಡುತ್ತಿದೆ. ಖಂಡಿತವಾಗಿ ಇದೊಂದು ಒಳ್ಳೆಯ ಪ್ರಯತ್ನ. ಅಭಿನಂದನಾರ್ಹ.
ಹೆಗಡೆ ಅವರು ಆಯ್ದುಕೊಂಡ ಶೀರ್ಷಿಕೆಯೇ ಹೇಳಿಕೊಳ್ಳುವಂತೆ ಕಲಾವಿದರ ಸಂಪರ್ಕ ಸಾಧನೆಗೆ ನೆರವಾಗಲಿದೆ. ಜನಸಾಮಾನ್ಯರು ಮತ್ತು ಕಲಾಪ್ರಿಯರ ನಡುವಿನ ಸೇತುವಾಗಲಿದೆ. ವಿಭಿನ್ನ ಕಲಾಕೃತಿಗಳ ವೀಕ್ಷಣೆ ಮತ್ತು ಕಲಾವಿದರ ಜತೆ ಮಾತುಕತೆ, ಚರ್ಚೆಗೂ ವೇದಿಕೆಯಾಗಲಿದೆ.
ಹೀಗೆ ನಾನಾ ಕಾರಣಗಳಿಂದ ಈ ಪ್ರಯತ್ನ ಯಶಸ್ಸಿನ ಮಾರ್ಗ ತೋರಿಸುವಲ್ಲಿ ಕಾರಣವೊಂದಾಗಬಹುದು. ಈ ನಿಟ್ಟಿನಲ್ಲಿ ಕೋಬಾಲ್ಟ್ ಉದ್ದೇಶ ಯಶಸ್ವಿಯಾಗಲಿ. ಕಲಾವಿದರಿಗೆ ಒಂದು ಉತ್ತಮ ವೇದಿಕೆಯಾಗಲಿ. ಜನಮಾನಸದಲ್ಲಿ ಬೇರೂರಲಿ ಎಂದು ಆಶಿಸೋಣ.
ನಾಳೆ ನಡೆಯಲಿರುವ “ಕಲಾ ಸಂಪರ್ಕ / KALA SAMPARKA” ಕಾರ್ಯಕ್ರಮಕ್ಕೆ ಎಕ್ಯುರೆಕ್ಸ್ ಸೊಲ್ಯೂಶನ್ ಪ್ರೈ.ಲಿ. ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್. ರಾಮಮೋಹನ್ ಅವರು ಹಾಗೂ ರಾಜ್ಯದ ಹಿರಿಯ ಕಲಾವಿದರು, ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರಾದ ಚಿ.ಸು. ಕೃಷ್ಣ ಸೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
🙏 Best wishes to Cobalt fourm 💐

Share This

Leave a Reply

Your email address will not be published. Required fields are marked *